Showing posts with label Colours. Show all posts
Showing posts with label Colours. Show all posts

Friday, April 3, 2020

ವಿನೂತನವಾದ ಚಿಂತನೆಯ ಪ್ರಯತ್ನ

"ಜೀವನವು ನಾಟಕೀಯ ಪರಿಣಾಮಗಳ ದೃಶ್ಯಗಳೇ ಹೊರತು ಬೇರೇನೂ ಅಲ್ಲ."

ಪ್ರಕೃತಿಯಲ್ಲಿರುವುದು ಅಥವಾ ಪ್ರಕೃತಿಯ ಸುಂದರ ದೃಶ್ಯಗಳನ್ನು ನೋಡುವುದು ನಮ್ಮ ಮನಸ್ಸಿನಲ್ಲಿ ಬಲವಾದ ಪರಿಣಾಮಗಳನ್ನು ಬೀರುತ್ತದೆ, ಅದೊಂದು ರೀತಿಯ ಪವಾಡ. ಇದು ಯಾವುದೇ ನಕಾರಾತ್ಮಕತೆಯನ್ನು ಕಡಿಮೆ ಮಾಡುವುದಲ್ಲದೆ, ಆಹ್ಲಾದಕರ ಭಾವನೆಗಳನ್ನು ಮತ್ತು ದೈಹಿಕ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ. ನಾವು ಜೀವಂತವಾಗಿರುವ ಭಾವನೆಯದು! ಭಾರತದ ಹಚ್ಚಹಸಿರು ಸ್ಥಳಗಳ ನಮ್ಮ ಭೇಟಿ ಮತ್ತು ಪ್ರಕೃತಿಯ ಸೌಂದರ್ಯವು, ಅವುಗಳನ್ನು ವರ್ಷಗಳವರೆಗೆ ನೆನಪಿಟ್ಟುಕೊಳ್ಳಲು ನನ್ನ  ಮನಸ್ಸಿನಲ್ಲಿ ಆಳವಾದ ಗುರುತಾಗಿವೆ; ವಿಶೇಷವಾಗಿ ಪಶ್ಚಿಮ ಘಟ್ಟಗಳ ಭೇಟಿ.

ನಾನು ಅದ್ಭುತ ಪ್ರಕೃತಿಯ ಸ್ಥಳಗಳಿಗೆ ಭೇಟಿ ನೀಡಿದಾಗಲೆಲ್ಲಾ, ಮೆದುಳಿನ ಸೃಜನಶೀಲ ವಲಯವು ಅದನ್ನು ಶಾಶ್ವತವಾಗಿ ದಾಖಲಿಸುತ್ತಿತ್ತು ಮತ್ತು ನನ್ನ ವರ್ಣಚಿತ್ರಗಳಲ್ಲಿ ಚಿತ್ರಿಸಲು ಸಹಾಯ ಮಾಡುತ್ತಿತ್ತು. ಪ್ರತಿ ಬಾರಿ ಪೇಂಟಿಂಗ್ ಬ್ರಷ್ಅನ್ನು ಹಿಡಿದಿಟ್ಟುಕೊಂಡಾಗ, ಬಣ್ಣಗಳನ್ನು ಆರಿಸಲು ಮತ್ತು ವಿವಿಧ ಸ್ಥಳಗಳಲ್ಲಿ ದಾಖಲು ಮಾಡಲಾದ ನನ್ನ ನೆನಪಿನ ಚಿತ್ರಗಳನ್ನು ಚಿತ್ರಿಸಲು ಆತ್ಮವು ಮಾರ್ಗದರ್ಶನ ನೀಡುತ್ತಿತ್ತು. ಭಾರತದಲ್ಲಿ ಕಂಡುಕೊಂಡ ಪ್ರಕೃತಿಯ ಭಾಷೆಯನ್ನು ವಿನ್ಯಾಸಗೊಳಿಸಲು ಕನಸು ಮತ್ತು ಮನಸ್ಸಿನ ವಾಸ್ತವತೆಯ ನಡುವೆ ಸದಾ ಹೋರಾಟ ನಡೆಯುವಂತ್ತಿರುತ್ತಿತ್ತು. ಈಗ ನೈಸರ್ಗಿಕ ಹಸಿರಿನಿಂದ ವ್ಯತಿರಿಕ್ತವಾಗಿರುವ ಮರುಭೂಮಿಯಂತಹ ಪ್ರದೇಶಗಳಲ್ಲಿ ವಾಸಿಸುತ್ತಿರುವುದರಿಂದ, ಈ ಮಾನವ ನಿರ್ಮಿತ ವೈಭವದಲ್ಲಿ ಆ ನೈಸರ್ಗಿಕ ಕಾಡುಗಳನ್ನು ಕಳೆದುಕೊಂಡಿದ್ದೇನೆ. ಆದ್ದರಿಂದ ಪ್ರಕೃತಿಯನ್ನು ಅನುಕರಿಸಲು ಮತ್ತು ಸವಿನೆನಪುಗಳ ಬದುಕನ್ನು ಯೋಚಿಸಿ, ನನ್ನ ಹೃದಯಸ್ಪರ್ಶಿ ಚಿತ್ರಕಲೆಯನ್ನು ಚಿತ್ರಿಸಲು ಪ್ರಾರಂಭಿಸಿದೆ.

ಚಿತ್ರಕಲೆಯು ಯಾವಾಗಲೂ ನನ್ನ ಸಂತೋಷದ ಸಮಯವಾಗಿದೆ. ಪ್ರತಿ ಕ್ಯಾನ್ವಾಸ್ ಒಂದು ಪ್ರಯಾಣದ್ದಂತ್ತಿದ್ದು, ಜಗತ್ತು ಅದ್ಭುತವೆನಿಸುತ್ತದೆ. ನನ್ನ ಸ್ವಂತ ವಾಸ್ತವ ಅಥವಾ ಸತ್ಯತೆ ಮತ್ತು  ಮಾತನಾಡದ ಮಾತುಗಳಿಗೆ ಇದು ಪರಿಹಾರವಾಗಿದೆ. ಇದೊಂದು ಈಗ ಡೈರಿಯಂತಾಗಿದೆ. ಗಾಢವಾದ ಬಣ್ಣಗಳು ಮತ್ತು ಬೇಕಾದ ವಿನ್ಯಾಸಗಳೊಂದಿಗೆ ಸ್ವಯಂ ಅಭಿವ್ಯಕ್ತಿಗೆ ಸಂಬಂಧಿಸಿ ಯಾರೂ ಚಿತ್ರಿಸಬಹುದು. ಮೊದಲು ನನಗೆ ಅಕ್ಷರಶಃ ಹೇಗೆ ಚಿತ್ರಿಸಬೇಕೆಂದು ಅಥವಾ ಯಾವುದನ್ನು ಚಿತ್ರಿಸಬೇಕೆಂದು ತಿಳಿದಿರಲಿಲ್ಲ, ಆದರೆ ಮನಸ್ಸಿನಲ್ಲಿರುವ ಅನೇಕ ನೆನಪುಗಳೊಂದಿಗೆ ಪ್ರಾರಂಭಿಸಿದೆ. ಇದೀಗ ಹಾಡುಗಾರಿಕೆ, ಚಿತ್ರಕಲೆ ಮತ್ತು ಧ್ಯಾನ, ಆಧ್ಯಾತ್ಮಿಕ ಪ್ರಯಾಣವು ನಿತ್ಯದ ಬಿಡುವಿನಲ್ಲಿ ಒಂದು ಸುಂದರ ಜಗತ್ತನ್ನೇ ಸೃಷ್ಟಿಸುತ್ತದೆ. ನನ್ನ ಕೈಯಲ್ಲಿ ಮೂಡಿರುವ ಪ್ರಕೃತಿಯ ಕೆಲವು ಅಕ್ರಿಲಿಕ್ ವರ್ಣಚಿತ್ರಗಳು ಇಲ್ಲಿವೆ. ಪ್ರತಿಯೊಂದೂ ಭೇಟಿ ನೀಡಿದ ಸ್ಥಳದ ನೆನಪುಗಳನ್ನು ಚಿತ್ರಿಸುತ್ತದೆ.     

ಕೇರಳ ಶೈಲಿಯ ಮ್ಯೂರಲ್ ಪೇಂಟಿಂಗ್‌ನಲ್ಲಿ ಲೋನಾವ್ಲಾ ಪ್ರವಾಸದ ಚಿತ್ರಣ

ಮಹಾರಾಷ್ಟ್ರದ ಪಂಚಗಣಿಗೆ ಭೇಟಿ ನೀಡಿದ ದೃಶ್ಯ - ಸಿಲ್ಹೌಟ್ಟ್ ಪೇಂಟಿಂಗ್

ಆಧ್ಯಾತ್ಮಿಕ ಪ್ರಯಾಣ @ ಉಜಿರೆಯ ನೇಚರೊಪತಿ ರೆಸಾರ್ಟ್, ಕರ್ನಾಟಕ - 
ಪ್ಯಾಲೆಟ್ ಚಾಕು ಬಳಸಿ ಅಂತಃಪ್ರಜ್ಞೆ ಚಿತ್ರಣ

ಈಗ ನಮ್ಮ ಸುತ್ತಲೂ ಗೊಂದಲಮಯ ಪ್ರಪಂಚವಿದೆ, ಆದರೆ ಈ ನಕಾರಾತ್ಮಕತೆಯಲ್ಲಿ ಸಕಾರಾತ್ಮಕತೆಯನ್ನು ಹುಡುಕಲು ನನ್ನನ್ನು ನಾನು ಸವಾಲು ಮಾಡಿ, ಚದುರಿದ ಮನಸ್ಸನ್ನು ಚಿತ್ರಕಲೆಯ ಮೂಲಕ ಮೌನಗೊಳಿಸುತ್ತಿರುವೆ. ಅದು ಜೀವಂತವಾಗಿದ್ದೇವೆ ಎಂಬ ಅನುಭವಿಸುವ ಮಾರ್ಗ. ಗತಕಾಲದ ನೆನಪುಗಳು ಇಲ್ಲಿ ಉಲ್ಲೇಖವಾದ ಸ್ಥಳಗಳಾಗಿವೆ. ಜೀವನದಲ್ಲಿ ಸಂತೋಷವು ನಾವು ತಲುಪುವ ನಿಲ್ದಾಣವಲ್ಲ, ಆದರೆ ಪ್ರಯಾಣಿಸುವ ಒಂದು  ವಿಧಾನ… ಈ ನಿರ್ಜನ ಸ್ಥಳದಿಂದ ಈಗ ನನ್ನ ವರ್ಣಚಿತ್ರಗಳ ಮೂಲಕ ನೈಸರ್ಗಿಕ ಸ್ಥಳಗಳಿಗೆ ಪ್ರಯಾಣಿಸುತ್ತಿರುವೆ. 

"ನಗು ನಗುತಾ ನಲಿ ನಲಿ,
ಎಲ್ಲಾ ದೇವನ ಕಲೆ ಎಂದೇ ನೀ ತಿಳಿ, 
ಅದರಿಂದ ನೀ ಕಲಿ…"

ಶುಭಾಶಯಗಳೊಂದಿಗೆ,


Tuesday, March 10, 2020

ಚಿತ್ರಕಲೆ; ಸ್ವತಃ ಪ್ರಯತ್ನಿಸಿ

"ನಿರಂತರ ಪ್ರಯಾಣವೇ ಒಂದು ಗಮ್ಯಸ್ಥಾನವಾಗಿದೆ!"

ಕಾಲೇಜಿನ ದಿನಗಳು; ಸ್ನೇಹಿತರು, ನಾಟಕಗಳು, ಭಾವನೆಗಳು ಮತ್ತು ಕಲಿಕೆಯ ಮಿಶ್ರಣದೊಂದಿಗೆ ಜೀವನದ ಸುವರ್ಣ ಹಂತ. ನನ್ನ ಕೌಶಲ್ಯಗಳನ್ನು ನಾನು ನಿಜವಾಗಿಯೂ ಅನ್ವೇಷಿಸಿದ ದಿನಗಳವು. ಯೌವ್ವನದ ಮನಸ್ಸು ಜೀವನದಲ್ಲಿ ಒಂದು ದೊಡ್ಡ ಗುರಿಯನ್ನು ಹುಡುಕುತ್ತಿತ್ತು, ಶಕ್ತಿಯಿಂದ ತುಂಬಿತ್ತು ಮತ್ತು ಜೀವನದ ಹೋರಾಟಕ್ಕೆ ಸಿದ್ಧವಾಗಿತ್ತು. ಜ್ಯೋತಿಷಿ (ಭಟ್ ಅಂಕಲ್) ಒಬ್ಬರು ನನ್ನ ಸಾಮರ್ಥ್ಯಗಳನ್ನು ಪ್ರಶ್ನಿಸಿ, ಆ ಸಾಮರ್ಥ್ಯಗಳನ್ನು ತಿಳಿದುಕೊಳ್ಳಲು ಮತ್ತು ಜೀವನದಲ್ಲಿ ಪ್ರಗತಿಗೆ ಸಹಾಯ ಮಾಡಿದ ಸಮಯ ಅದು. ಉತ್ತಮ ಜೀವನವನ್ನು ನಡೆಸಲು ನನ್ನ ಸೃಜನಶೀಲತೆಯ ಕೊಳವನ್ನು ಪರಿಶೀಲಿಸಲು ಅಪರಿಚಿತರೊಬ್ಬರು ನನಗೆ ಹೇಗೆ ಸಹಾಯ ಮಾಡಿದರು ಅನ್ನುವುದೇ ಒಂದು ರೋಚಕ ಕಥೆ!

ನನ್ನಲ್ಲಿ ಅಡಗಿದ್ದ ಚಿತ್ರಕಲೆಯ ಕೌಶಲ್ಯಕ್ಕೂ ಒಂದು ಸಮಯ ಬಂದಿತ್ತು. ಶಾಲಾ ದಿನಗಳಲ್ಲಿ ಚಿತ್ರಕಲೆಯ ಬಗ್ಗೆ ನನಗೆ ಯಾವಾಗಲೂ ಪ್ರೀತಿ ಇದ್ದರೂ ಅದನ್ನು ಎಂದಿಗೂ ಪ್ರವರ್ಧಮಾನಕ್ಕೆ ತಂದಿರಲಿಲ್ಲ. ಓದಿಗೋಸ್ಕರ ಅಂತಹ ಸೃಜನಶೀಲತೆಗೆ ಅಡ್ಡಿ ಮಾಡಿದ್ದೆ. ಆದಾಗ್ಯೂ, ಇದು ಕೇವಲ ನನಗೆ ಹವ್ಯಾಸವಾಗಿತ್ತು. ಬಾಲ್ಯದಲ್ಲಿ ಆಲದ ಮರದ ಎಲೆಗಳು, ನವಿಲು ಗರಿಗಳನ್ನು ಪುಸ್ತಕದೊಳಗೆ ಇಟ್ಟುಕೊಳ್ಳುವ ಅಭ್ಯಾಸವಿತ್ತು (ಅವುಗಳನ್ನು ದ್ವಿಗುಣಗೊಳಿಸುವ ನಂಬಿಕೆಗಳು ಸದಾ ಇದ್ದಿದ್ದರಿಂದ!😅). ಕಾಲೇಜು ದಿನಗಳಲ್ಲಿ, ಹೂವುಗಳನ್ನು ಮತ್ತು ಎಲೆಗಳನ್ನು ಒಣಗಿಸುವ ಪ್ರಾಜೆಕ್ಟ್ ಕೆಲಸವನ್ನು ನಾವು ಹೊಂದಿದ್ದೆವು. ಅವುಗಳನ್ನು ಕೆಲವು ವಾರಗಳವರೆಗೆ ಭಾರವಾದ ಪುಸ್ತಕದೊಳಗೆ ಇರಿಸುವ ಮೂಲಕ ಒಣಗಿಸುತ್ತಿದ್ದೆವು, ನಂತರ ಅವುಗಳನ್ನು ನಮ್ಮ ಪ್ರಾಯೋಗಿಕ ದಾಖಲೆಗಳಿಗಾಗಿ ಬಳಸುತ್ತಿದ್ದೆವು. ಆಗ ನನ್ನ ಕಲಾತ್ಮಕ ಸೃಜನಶೀಲತೆಯು ಅಕ್ರಿಲಿಕ್ ಬಣ್ಣಗಳನ್ನು ಬಳಸಿ ಒಣಗಿದ ಆಲದ ಎಲೆಗಳ ಮೇಲೆ ಚಿತ್ರಕಲೆಗಳನ್ನು ಚಿತ್ರಿಸುವಿಕೆಯ ಕಡೆಗೆ ತಿರುಗಿತು. ನಾನು ಯಾರಿಂದಲೂ ತರಬೇತಿ ಪಡೆದಿರಲಿಲ್ಲ, ಆದರೆ ಸರಳ ಚಿಕಿತ್ಸೆಗೆ ಎಂದು ಪ್ರೀತಿಸುವ ಮೂಲಕ ಚಿತ್ರಕಲೆ ಶುರುವಾಯಿತು. ಈ ಬಾರಿ ಭಾವನೆಗಳ ಮಿಶ್ರಣವು ನನ್ನ ಸೃಜನಶೀಲತೆಗೆ, ಧ್ಯಾನಸ್ಥ ಕ್ಷಣಕ್ಕೆ ಉತ್ತೇಜನ ನೀಡಿತ್ತು. 

ಸರಳ ವಿಧಾನ: ಅಶ್ವತ್ಥ ಎಲೆ ಅಥವಾ ಯಾವುದೇ ದೊಡ್ಡ ಎಲೆಯನ್ನು ಸಂಪೂರ್ಣವಾಗಿ ಒಣಗಿಸಿ. ಎಲೆಯ ಅಸ್ಥಿಪಂಜರವನ್ನು ಮಾತ್ರ ಪಡೆಯಲು ಭಾರವಾದ ಪುಸ್ತಕದೊಳಗೆ ಇರಿಸಿ. ಇದಕ್ಕೆ ಕೆಲವು ದಿನಗಳೇ ಬೇಕಾಗುತ್ತದೆ. ಅದನ್ನು ಸ್ವಚ್ಛ ಗೊಳಿಸಿ, ತೇವಾಂಶ ಇರಬಾರದು. ನಂತರ ಅದನ್ನು ಯಾವುದೇ ಹಲಗೆಯ ಮೇಲೆ ಇರಿಸಿ, ಮೊದಲು ಬೇಸ್ ಪೇಂಟ್ ಹಾಕಿ; ಕಪ್ಪು ಅಥವಾ ಬಿಳಿಯ ಬಣ್ಣ ಮತ್ತು ನಿಮಗೆ ಬೇಕಾದ ರೀತಿಯಲ್ಲಿ ವಿನ್ಯಾಸಗೊಳಿಸಿ. ಬಿಂಗೊ! ನಾನು ಈ ರೀತಿ ಚಿತ್ರಿಸಿದಾಗಲೆಲ್ಲಾ, ಅದು ನನ್ನಲ್ಲಿ  ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿತ್ತು. ಒಂದು ಅಜ್ಞಾತ ಭಯದ ವಿರುದ್ಧ ಹೋರಾಡುವ ಶಕ್ತಿ ಸಿಕ್ಕಿತ್ತು. ಆ ದಿನಗಳಲ್ಲಿ ಹದಿಹರೆಯದವಳಾಗಿ ಅಕ್ಷರಶಃ ಸದಾ ಕಾರ್ಯನಿರತಳಾಗಿರುತ್ತಿದ್ದೆ. ಹೆತ್ತವರನ್ನು ಭೇಟಿ ಮಾಡಿದಾಗಲೆಲ್ಲಾ ಸದಾ ಮಂದಗತಿಯಲ್ಲಿರುವಂತೆ ನನ್ನ ತಾಯಿ ಹೇಳುತ್ತಿದ್ದರು. 

ಒಣಗಿದ ಆಲದ ಎಲೆಯ ಮೇಲೆ ನನ್ನ ಚಿತ್ರಕಲೆ
ಅಕ್ರಿಲಿಕ್ ಬ್ಲೇಡ್ ಪೇಯಿಂಟಿಂಗ್ 

ಹದಿಹರೆಯದವಳಾಗಿ ನನ್ನ ಜೀವನವನ್ನು ಯೋಚಿಸಿದಾಗಲೆಲ್ಲಾ ಅಲ್ಲೊಂದು ಆಳವಾದ ತೃಪ್ತಿ ಇದೆ. ಕಾಲೇಜು ದಿನಗಳಲ್ಲಿ ಜೀವನದ ವಾಸ್ತವತೆಯ ನಿಜವಾದ ಉಡುಗೊರೆಗಾಗಿ ಭಟ್ ಅಂಕಲ್ (ಜ್ಯೋತಿಷಿ) ಅವರಿಗೆ ಕೃತಜ್ಞಳಾಗಿರುವೆ. ನನ್ನ ಕೌಶಲ್ಯಗಳನ್ನು ಅನ್ವೇಷಿಸಲು, ನೈಜ ಜಗತ್ತಿನಲ್ಲಿ ಪ್ರವೇಶಿಸುವ ಮೊದಲು ಜೀವನದ ಪ್ರತಿ ಪ್ರಾಮಾಣಿಕತೆಯನ್ನು ಕಂಡುಕೊಳ್ಳಲು ಮತ್ತು ವಿದ್ಯಾರ್ಥಿ ಜೀವನ ಮುಗಿಯುವ ಮೊದಲು ಏನನ್ನಾದರೂ ಸಾಧಿಸೆಂದು ಹೇಳಿದ್ದರು.  ಮರೆಯಲಾಗದ ಆ ಕಾಲೇಜು ದಿನಗಳು ನಂತರದ ಜೀವನಕ್ಕೆ ನನಗೆ ಬಹಳಷ್ಟು ಸಹಾಯ ಮಾಡಿದೆ. ನಿಜವಾಗಿಯೂ ವಿದ್ಯಾರ್ಥಿ ಜೀವನ ನಮ್ಮ ಬದುಕಿನ ಒಂದು  ಸುವರ್ಣ ಹಂತ! :-)

ಯಾವಾಗ ನಮ್ಮಲ್ಲಿರುವ ಅಲ್ಪಾವಧಿಯನ್ನು ನೆನಪಿಸಿಕೊಳ್ಳುವ ಪ್ರಯತ್ನವನ್ನು ನಾವು ಮಾಡುತ್ತೇವೆಯೋ, ನಾವು ಜೀವನದಲ್ಲಿ ಎಲ್ಲದಕ್ಕೂ ಆದ್ಯತೆ ನೀಡುತ್ತೇವೆ ಮತ್ತು 'ಸಮಯವನ್ನು' ಉತ್ತಮವಾಗಿ ಬಳಸಿಕೊಳ್ಳುತ್ತೇವೆ. ಹೀಗೆ ಮುಂದೆ ನಾನು ವಿಭಿನ್ನ ಜೀವನ ಮತ್ತು ಜೀವನಶೈಲಿಯನ್ನು ಹೊಂದಲು ಮತ್ತು ವಿಭಿನ್ನ ಜನರು ಒಡ್ಡುವ ಜೀವನದ ಸವಾಲುಗಳನ್ನು ಎದುರಿಸಲು ಸುಲಭವಾಗಿತ್ತು. 

ನೀವು ಅಂತಹ ಸನ್ನಿವೇಶಗಳನ್ನು ಎದುರಿಸಿದ್ದೀರಾ? ಕಾಮೆಂಟ್‌ನಲ್ಲಿ ಹಂಚಿಕೊಳ್ಳಿ. 
ಶುಭಾಶಯಗಳು,