ಪ್ರಕೃತಿಯಲ್ಲಿರುವುದು ಅಥವಾ ಪ್ರಕೃತಿಯ ಸುಂದರ ದೃಶ್ಯಗಳನ್ನು ನೋಡುವುದು ನಮ್ಮ ಮನಸ್ಸಿನಲ್ಲಿ ಬಲವಾದ ಪರಿಣಾಮಗಳನ್ನು ಬೀರುತ್ತದೆ, ಅದೊಂದು ರೀತಿಯ ಪವಾಡ. ಇದು ಯಾವುದೇ ನಕಾರಾತ್ಮಕತೆಯನ್ನು ಕಡಿಮೆ ಮಾಡುವುದಲ್ಲದೆ, ಆಹ್ಲಾದಕರ ಭಾವನೆಗಳನ್ನು ಮತ್ತು ದೈಹಿಕ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ. ನಾವು ಜೀವಂತವಾಗಿರುವ ಭಾವನೆಯದು! ಭಾರತದ ಹಚ್ಚಹಸಿರು ಸ್ಥಳಗಳ ನಮ್ಮ ಭೇಟಿ ಮತ್ತು ಪ್ರಕೃತಿಯ ಸೌಂದರ್ಯವು, ಅವುಗಳನ್ನು ವರ್ಷಗಳವರೆಗೆ ನೆನಪಿಟ್ಟುಕೊಳ್ಳಲು ನನ್ನ ಮನಸ್ಸಿನಲ್ಲಿ ಆಳವಾದ ಗುರುತಾಗಿವೆ; ವಿಶೇಷವಾಗಿ ಪಶ್ಚಿಮ ಘಟ್ಟಗಳ ಭೇಟಿ.
ನಾನು ಅದ್ಭುತ ಪ್ರಕೃತಿಯ ಸ್ಥಳಗಳಿಗೆ ಭೇಟಿ ನೀಡಿದಾಗಲೆಲ್ಲಾ, ಮೆದುಳಿನ ಸೃಜನಶೀಲ ವಲಯವು ಅದನ್ನು ಶಾಶ್ವತವಾಗಿ ದಾಖಲಿಸುತ್ತಿತ್ತು ಮತ್ತು ನನ್ನ ವರ್ಣಚಿತ್ರಗಳಲ್ಲಿ ಚಿತ್ರಿಸಲು ಸಹಾಯ ಮಾಡುತ್ತಿತ್ತು. ಪ್ರತಿ ಬಾರಿ ಪೇಂಟಿಂಗ್ ಬ್ರಷ್ಅನ್ನು ಹಿಡಿದಿಟ್ಟುಕೊಂಡಾಗ, ಬಣ್ಣಗಳನ್ನು ಆರಿಸಲು ಮತ್ತು ವಿವಿಧ ಸ್ಥಳಗಳಲ್ಲಿ ದಾಖಲು ಮಾಡಲಾದ ನನ್ನ ನೆನಪಿನ ಚಿತ್ರಗಳನ್ನು ಚಿತ್ರಿಸಲು ಆತ್ಮವು ಮಾರ್ಗದರ್ಶನ ನೀಡುತ್ತಿತ್ತು. ಭಾರತದಲ್ಲಿ ಕಂಡುಕೊಂಡ ಪ್ರಕೃತಿಯ ಭಾಷೆಯನ್ನು ವಿನ್ಯಾಸಗೊಳಿಸಲು ಕನಸು ಮತ್ತು ಮನಸ್ಸಿನ ವಾಸ್ತವತೆಯ ನಡುವೆ ಸದಾ ಹೋರಾಟ ನಡೆಯುವಂತ್ತಿರುತ್ತಿತ್ತು. ಈಗ ನೈಸರ್ಗಿಕ ಹಸಿರಿನಿಂದ ವ್ಯತಿರಿಕ್ತವಾಗಿರುವ ಮರುಭೂಮಿಯಂತಹ ಪ್ರದೇಶಗಳಲ್ಲಿ ವಾಸಿಸುತ್ತಿರುವುದರಿಂದ, ಈ ಮಾನವ ನಿರ್ಮಿತ ವೈಭವದಲ್ಲಿ ಆ ನೈಸರ್ಗಿಕ ಕಾಡುಗಳನ್ನು ಕಳೆದುಕೊಂಡಿದ್ದೇನೆ. ಆದ್ದರಿಂದ ಪ್ರಕೃತಿಯನ್ನು ಅನುಕರಿಸಲು ಮತ್ತು ಸವಿನೆನಪುಗಳ ಬದುಕನ್ನು ಯೋಚಿಸಿ, ನನ್ನ ಹೃದಯಸ್ಪರ್ಶಿ ಚಿತ್ರಕಲೆಯನ್ನು ಚಿತ್ರಿಸಲು ಪ್ರಾರಂಭಿಸಿದೆ.
ಚಿತ್ರಕಲೆಯು ಯಾವಾಗಲೂ ನನ್ನ ಸಂತೋಷದ ಸಮಯವಾಗಿದೆ. ಪ್ರತಿ ಕ್ಯಾನ್ವಾಸ್ ಒಂದು ಪ್ರಯಾಣದ್ದಂತ್ತಿದ್ದು, ಜಗತ್ತು ಅದ್ಭುತವೆನಿಸುತ್ತದೆ. ನನ್ನ ಸ್ವಂತ ವಾಸ್ತವ ಅಥವಾ ಸತ್ಯತೆ ಮತ್ತು ಮಾತನಾಡದ ಮಾತುಗಳಿಗೆ ಇದು ಪರಿಹಾರವಾಗಿದೆ. ಇದೊಂದು ಈಗ ಡೈರಿಯಂತಾಗಿದೆ. ಗಾಢವಾದ ಬಣ್ಣಗಳು ಮತ್ತು ಬೇಕಾದ ವಿನ್ಯಾಸಗಳೊಂದಿಗೆ ಸ್ವಯಂ ಅಭಿವ್ಯಕ್ತಿಗೆ ಸಂಬಂಧಿಸಿ ಯಾರೂ ಚಿತ್ರಿಸಬಹುದು. ಮೊದಲು ನನಗೆ ಅಕ್ಷರಶಃ ಹೇಗೆ ಚಿತ್ರಿಸಬೇಕೆಂದು ಅಥವಾ ಯಾವುದನ್ನು ಚಿತ್ರಿಸಬೇಕೆಂದು ತಿಳಿದಿರಲಿಲ್ಲ, ಆದರೆ ಮನಸ್ಸಿನಲ್ಲಿರುವ ಅನೇಕ ನೆನಪುಗಳೊಂದಿಗೆ ಪ್ರಾರಂಭಿಸಿದೆ. ಇದೀಗ ಹಾಡುಗಾರಿಕೆ, ಚಿತ್ರಕಲೆ ಮತ್ತು ಧ್ಯಾನ, ಆಧ್ಯಾತ್ಮಿಕ ಪ್ರಯಾಣವು ನಿತ್ಯದ ಬಿಡುವಿನಲ್ಲಿ ಒಂದು ಸುಂದರ ಜಗತ್ತನ್ನೇ ಸೃಷ್ಟಿಸುತ್ತದೆ. ನನ್ನ ಕೈಯಲ್ಲಿ ಮೂಡಿರುವ ಪ್ರಕೃತಿಯ ಕೆಲವು ಅಕ್ರಿಲಿಕ್ ವರ್ಣಚಿತ್ರಗಳು ಇಲ್ಲಿವೆ. ಪ್ರತಿಯೊಂದೂ ಭೇಟಿ ನೀಡಿದ ಸ್ಥಳದ ನೆನಪುಗಳನ್ನು ಚಿತ್ರಿಸುತ್ತದೆ.
![]() |
| ಮಹಾರಾಷ್ಟ್ರದ ಪಂಚಗಣಿಗೆ ಭೇಟಿ ನೀಡಿದ ದೃಶ್ಯ - ಸಿಲ್ಹೌಟ್ಟ್ ಪೇಂಟಿಂಗ್ |
![]() |
ಆಧ್ಯಾತ್ಮಿಕ ಪ್ರಯಾಣ @ ಉಜಿರೆಯ ನೇಚರೊಪತಿ ರೆಸಾರ್ಟ್, ಕರ್ನಾಟಕ - ಪ್ಯಾಲೆಟ್ ಚಾಕು ಬಳಸಿ ಅಂತಃಪ್ರಜ್ಞೆ ಚಿತ್ರಣ |
"ನಗು ನಗುತಾ ನಲಿ ನಲಿ,
ಎಲ್ಲಾ ದೇವನ ಕಲೆ ಎಂದೇ ನೀ ತಿಳಿ,
ಅದರಿಂದ ನೀ ಕಲಿ…"
ಶುಭಾಶಯಗಳೊಂದಿಗೆ,





